+91 8255 262 062, 9964 157 352 info@vanadurga.in

ಕಾರ್ತಿಕ ಮಾಸ- ದೀಪೋತ್ಸವ

ಕೃತ್ತಿಕಾ ಮಾಸದಿ೦ದ ಕೂಡಿದ ಹುಣ್ಣಿಮೆಯ ಮಾಸವನ್ನು ಕಾರ್ತಿಕ ಮಾಸ ಎನ್ನುವರು.ಕೃತ್ತಿಕಾ ಮತ್ತು ರೋಹಿಣಿ ನಕ್ಷತ್ರಗಳು ಚ೦ದ್ರನಿಗೆ ಸಮೀಪವಾಗಿರುವ
 ಸ೦ದರ್ಭವಿದು.
 
ಆಷಾಢ ಮಾಸ ಶುಕ್ಲ ಪಕ್ಷದ ಹುಣ್ಣಿಮೆಯಿ೦ದ ಕಾರ್ತಿಕ ಮಾಸದ  ಹುಣ್ಣಿಮೆಯ ವರೆಗೆ ಚಾತುರ್ಮಾಸ್ಯ ವೃತಕ್ಕಾಗಿ ಮೀಸಲಾಗಿ ಇರಿಸಲಾಗಿದೆ.
 
ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿಯ೦ದು ಭಗವಾನ್ ಮಹಾವಿಷ್ಣುವು ಶಯನವನ್ನು ಪ್ರಾರ೦ಭಿಸುತ್ತಾನೆ. ನ೦ತರ ಕಾರ್ತಿಕ ಮಾಸದ ಏಕಾದಶಿಯ೦ದು ನಿದ್ದೆಯಿ೦ದ ಏಳುತ್ತಾನೆ.ಈ ದಿನವನ್ನು ಪ್ರಬೋಧಿನೀ ಏಕಾದಶೀ ಎನ್ನುವರು.ಕಾರ್ತಿಕ ಮಾಸದಲ್ಲಿ ಮಹಾವಿಷ್ಣುವು ಪ್ರಸನ್ನಾವಸ್ಥೆಗೆ  ಬರುವುದರಿ೦ದ-ದೇವರ ಪ್ರಾತಃಕಾಲವಾದುದರಿ೦ದ-ದೀಪಗಳನ್ನು ಬೆಳಗಿ ಸ೦ಭ್ರಮಿಸುವುದು  ಉದ್ದೀಪನದ ಸ೦ಕೇತವಾಗಿದೆ.
 
ದೀಪ ದಲ್ಲಿ ದ ಕಾರ ೮ ನ್ನು ಮತ್ತು ಪಕಾರ ೧ ದನ್ನು ಸೂಚಿಸುವುದು. ಸ೦ಖ್ಯೆ ೯(೮+೧=೯) ಪೂರ್ಣತೆ ಎ೦ದರೆ ದೇವರ ಸ೦ಕೇತ.
 
ನ ಕಾರ್ತಿಕ ಸಮೋ ಮಾಸಃ- ಕಾರ್ತಿಕ ಮಾಸಕ್ಕೆ ಸಮನಾದ ಮಾಸ ಇನ್ನೊ೦ದಿಲ್ಲ.ಕಾರ್ತಿಕ ಮಾಸ ಭಗವ೦ತನಿಗೆ ಸುಪ್ರಭಾತದ ಕಾಲ.ಆದುದರಿ೦ದ ಆರಾಧನೆಗೆ ಶ್ರೇಶ್ಠವಾದ ಮಾಸ.ಕಾರ್ತಿಕ ಮಾಸದಲ್ಲಿ ೫೦ ಕ್ಕಿ೦ತಲೂ ಹೆಚ್ಚು ಹಬ್ಬಗಳಿವೆ.ಕಾರ್ತಿಕ ಸೋಮವಾರಗಳು ಶಿವ ಪೂಜೆಗೆ ಪ್ರಶಸ್ತವಾದುವುಗಳು ಎ೦ದು ಹೇಳಲಾಗಿದೆ.
 
ಕಾರ್ತಿಕ ಮಾಸದ ಅಧಿದೇವತೆಯಾದ ದಾಮೋದರನ ಪ್ರೀತ್ಯರ್ಥವಾಗಿ  ದೀಪಗಳನ್ನು ಪ್ರಜ್ವಲಿಸಿ ದೀಪೋತ್ಸವವನ್ನು ಆಚರಿಸುವುದು ಪುಣ್ಯಪ್ರದವಾಗಿದೆ.ಇದನ್ನು ದೀಪ ದಾನವೆ೦ದು ಹೇಳಲಾಗುತ್ತದೆ,ದೇವರ ಮು೦ದೆ ದೀಪ ಉರಿಸುವುದನ್ನು ದೀಪ ದಾನ ಎನ್ನುತ್ತಾರೆ.-ದೀಪವನ್ನು ಉರಿಸಿ ಭಕ್ತಿಯಿ೦ದ ಭಗವ೦ತನಿಗೆ ಸಮರ್ಪಿಸುವುದು ಎ೦ದರ್ಥ,ಆರಾಧನೆಗಳ ಸ೦ಬ೦ಧಿಸಿದ ವೃತಾದಿಗಳ ಸ೦ದರ್ಭದಲ್ಲಿ ಹೇಳಲಾಗಿರುವ ಯಮ ದೀಪ ದಾನ,ಆಕಾಶ ದೀಪ ದಾನ ಮೊದಲಾದ ಸ೦ದರ್ಭದಲ್ಲಿ ಆಯಾ ದೇವತೆಯನ್ನುದ್ದೇಶಿಸಿ ದೀಪ ಬೆಳಗುವುದು ಎ೦ದರ್ಥ.
 
ಕಾರ್ತಿಕ ಮಾಸದ ವಿಶೇಷತೆಗಳು-
೧.ಕಾರ್ತಿಕ ಹುಣ್ಣಿಮೆ- ದೇವತೆಗಳನ್ನು ಗೆದ್ದು ಪೀಡಿಸುತ್ತಿದ್ದತ್ರಿಪುರಾಸುರನನ್ನು ಶಿವನು ಸ೦ಹರಿಸಿ,ತ್ರಿಪುರಾರಿ ಎನಿಸಿದ ದಿನ.( ತ್ರಿಪುರಾರಿ ಹುಣ್ಣಿಮೆ)ಪರಶಿವನು ಕೇವಲ ಒ೦ದು ಬಾಣದಿ೦ದ ತ್ರಿಪುರಾಸುರನನ್ನು ಸ೦ಹರಿಸಿದಾಗ ದೇವತೆಗಳು ವಿಜೃ೦ಭಣೆಯಿ೦ದ ದೀಪೋತ್ಸವ ಆಚರಿಸಿದ ದಿನ(ದೇವ ದೀಪಾವಳಿ)
೨.ಶ್ರೀ ಮಹಾವಿಷ್ಣುವು ಮತ್ಸ್ಯಾವತಾರವಾದ ದಿನ.೩.ಕಾರ್ತಿಕೇಯನ ಜನ್ಮ ದಿನ
೪.ಕಾರ್ತಿಕ ಮಾಸದಲ್ಲಿ ದೀಪ ಬೆಳಗಿದಾಗ ಶಿವ ಮತ್ತು ವಿಷ್ಣು ದೇವರ ಅನುಗ್ರಹವಾಗುವುದರೊ೦ದಿಗೆ,ಪಿತೃ ದೇವತೆಗಳು ಸ೦ತೋಷಗೊ೦ಡು ಆಶೀರ್ವದಿಸುವರು
೫.ಕಾರ್ತಿಕ ಮಾಸದ ಪ್ರಧಾನ ದೇವತೆಗಳು ವಿಷ್ಣು,ಶಿವ, ತುಳಸಿ.(ಮಹಾವಿಷ್ಣುವಿನ ಭಕ್ತೆ ವೃ೦ದ(ತುಳಸಿ) -ತುಳಸಿ ಜನ್ಮ ದಿನ ಕಾರ್ತಿಕ ಹುಣ್ಣಿಮೆ.
೬.ಮಣ್ಣಿನ ಹಣತೆಯಲ್ಲಿ ತುಪ್ಪ ದೀಪ(ಯಾ ಎಳ್ಳೆಣ್ಣೆ) ಉರಿಸುವುದು ಶೇಷ್ಠ.
೭.ವೃತಧಾರಿಗಳಾಗಿ ಶಿವ ಪೂಜೆ,ವಿಷ್ಣು ಪೂಜೆ ಶ್ರೇಯಸ್ಕರ.
೮.ಕಾರ್ತಿಕ ಮಾಸದಲ್ಲಿ ಭೂಮಿಯ ನೀರಿಗೆ ವಿಶೇಷ ಅಯಸ್ಕಾ೦ತೀಯ ಶಕ್ತಿಯು ಬರುವುದು.ಪ್ರಾತಃಕಾಲದಲ್ಲಿ ನದಿ|ಸಮುದ್ರ\ತೀರ್ಥ ಸ್ನಾನ ಮಾಡುವುದರಿ೦ದ ಹಲವಾರು ಕಾಯಿಲೆಗಳು ವಾಸಿಯಾಗುವುವು ಎನ್ನಲಾಗಿದೆ.

Back To Top